೭೦ರ ದಶಕದಲ್ಲಿ ನಿರ್ಮಾಪಕ ಎ. ದ್ವಾರಕಾನಾಥ್ ಪದ್ಮಶ್ರೀ ಪಿಕ್ಚರ್ಸ್ ಲಾಂಛನದಡಿಯಲ್ಲಿ ಎ.ವಿ. ಶೇಷಗಿರಿರಾವ್ ನಿರ್ದೇಶನದೊಂದಿಗೆ ಡಾ|| ರಾಜ್ಕುಮಾರ್, ಮಂಜುಳಾ ಅಭಿನಯದ ಸಂಪತ್ತಿಗೆ ಸವಾಲ್ ಚಿತ್ರ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಅಚಾನಕ್ ಆಗಿ ಅಂದು ಡಾ|| ರಾಜ್ ಯಾರೇ ಕೂಗಾಡಲಿ ಊರೇ ಹೋರಾಡಲಿ ಎಂಬ ಗೀತೆಯೊಂದನ್ನು ಹಾಡಿದ್ದರು. ಈ ಗೀತೆ ಎಷ್ಟು ಜನಪ್ರಿಯವಾಯಿತೆಂದರೆ ಆ ಗೀತೆಯಿಂದ ಅಂದು ಡಾ|| ರಾಜ್ ಹಿನ್ನಲೆ ಗಾಯಕರಾಗಿಯೂ ಜನಪ್ರಿಯರಾದರು.
ಆ ಗೀತೆಯು ಯಾರೇ ಕೂಗಾಡಲಿ ಎಂಬ ಮೊದಲ ಸಾಲೊಂದು ಈಗ ಚಿತ್ರವಾಗಿ ಮೂಡಿಬರುತ್ತಿದೆ. ಪೂರ್ಣಿಮಾ ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ಡಾ|| ರಾಜ್ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸುತ್ತಿರುವ ಯಾರೇ ಕೂಗಾಡಲಿ ಚಿತ್ರದ ಚಿತ್ರೀಕರಣವು ಈಗ ನಗರದ ಸುತ್ತಮುತ್ತ ಸಾಗಿದೆ.
ಚಿತ್ರಕ್ಕಾಗಿ ಪುನೀತ್ರಾಜ್ಕುಮಾರ್, ಯೋಗೀಶ್, ಸಾಧುಕೋಕಿಲ, ಸಿಂಧೂ ಅಭಿನಯಿಸಿದ ಹಲವಾರು ಸನ್ನಿವೇಶಗಳನ್ನು ಸಕುಮಾರ್ ಛಾಯಾಗ್ರಹಣದಲ್ಲಿ ನಿರ್ದೆಶಕ ಸಮುದ್ರ ಖಣಿ ಚಿತ್ರಿಸಿಕೊಂಡರು.
ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಆಗಸ್ಟ್ ಮೊದಲ ವಾರದವರೆವಿಗೂ ನಡೆಯಲಿದೆ ಎಂದು ನಟ-ನಿರ್ಮಾಟಪಕ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ (ತಮಿಳು ಮೈನಾ ಖ್ಯಾತಿ) ಛಾಯಾಗ್ರಹಣ, ಜಾಕ್ಸನ್ (ಫರುತ್ತಿ ವೀರನ್ ಖ್ಯಾತಿ) ಕಲೆ, ದೀಪು.ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ, ರುದ್ರೇಶ್ ಎಂ.ಗೌಡ ನಿರ್ದೇಶನ ಸಹಕಾರ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆ ಇದ್ದು, ತಮಿಳಿನ ನಾಡೋಡಿಗಳ್, ಪೋರಾಲಿ, ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೆಶಿಸಿದ ಹೆಸರಾಂತ ನಿರ್ದೇಶಕ ಸಮುದ್ರ ಖಣಿ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಪುನೀತ್ ರಾಜ್ಕುಮಾರ್, ಯೋಗೀಶ್, ಭಾವನ, ಸಾಧುಕೋಕಿಲ, ಶೋಭರಾಜ್, ಸಿಂಧು, ನಾಗೇಂದ್ರ, ಆಶಾರಾಣಿ, ವರ್ಷಕೃಷ್ಣ, ಚಂದ್ರು, ಅಚ್ಚುತರಾವ್, ಲಕ್ಷ್ಮೀಹೆಗ್ಡೆ, ಮೈಕೋ ನಾಗರಾಜ್, ಸುರೇಶ್ಚಂದ್ರ, ಅರುಣ್ಸಾಗರ್, ತುಮಕೂರು ಮೋಹನ್ ಮುಂತಾದವರು ಇದ್ದಾರೆ.